new tab editing

SCROLING TEXT

ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಮನವಿ:ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. 1) ಕಡ್ಡಾಯವಾಗಿ ಮಾಸ್ಕ್ ಧರಿಸಿ. 2) ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. 3) ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ. 4) ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5) ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6) ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. 7) ಪ್ರತಿದಿನ ಮಾಸ್ಕ್ ಬಳಸಿದ ನಂತರ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ.PREVENTION IS BETTER THAN CURE . Attention : Get resources from menu-> Science > Pariksha kirana-22-23> .

Monday, August 31, 2020

 https://forms.gle/JCqd8NGdVsWDG6yC9

or 

https://docs.google.com/forms/d/e/1FAIpQLSepQxsp-HNdnNZajKoyPIwyLw_kA460ZmylCcB-RwJRcrEjzQ/viewform?usp=sf_link


Use this link to get google sheet on acids bases and salts . This quiz sheet helps you to evaluate and self study  - 

NCERT  Class 10 Science Chapter 2: Acids, Bases and Salts

Sunday, August 30, 2020

SCIENCE

 ENERGISED RESOURCES 

DEAR FRIENDS PLEASE CLICK TO ABOVE LINK TO GET CBSE SCIENCE RESOURCE BOOKS OF CLASS 8-10

Thursday, August 20, 2020

video

 

ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಳೆದ ಎರಡು ವಾರಗಳಲ್ಲಿ ಪ್ರಸಾರವಾದ ವಿಜ್ಞಾನ  ಸೇತುಬಂಧ ವಿಡಿಯೋ ಪಾಠಗಳ ವಿವರ: ಎಲ್ಲಾ ವಿಷಯಗಳ ವಿಡಿಯೋ ಪಾಠಗಳು ಮಕ್ಕಳ ವಾಣಿ ಯುಟ್ಯೂಬ್ ಚಾನೆಲ್ ನಲ್ಲಿ ಲಭ್ಯ ಇವೆ.

Day 1: 8th : ವಿಜ್ಞಾನಕ್ಕೆ ಪೀಠಿಕೆ: ರಾಮಚಂದ್ರ ಭಟ್ Rama Chandra ಮತ್ತು ಶ್ರೀನಿವಾಸ್. ಎ.

https://youtu.be/SRnRtTh5qoU

Day 3 : 8th : ಅಳತೆ ಮತ್ತು ಏಕಮಾನಗಳು: ಚನ್ನಪ್ಪ.ಕೆ.ಎಂ. Channappa Gowda KM https://youtu.be/Xe38_vVW3Sc

Day 6 8th : ವಿದ್ಯುತ್ ಶಕ್ತಿ, ಕಾಂತತ್ವ: ಸಯ್ಯದ್ ರಕೀಬ್ ಅಹಮದ್: 

https://youtu.be/f8weRj5RRAE 

Day 8 8th: ಸಸ್ಯಗಳು ಮತ್ತು ಪ್ರಾಣಿಗಳ ಸಂರಕ್ಷಣೆ: https://youtu.be/YbJGelVYyng

Day 3: 9th : ವಿಜ್ಞಾನಕ್ಕೆ ಪೀಠಿಕೆ: ರಾಮಚಂದ್ರ ಭಟ್ ಮತ್ತು ಸಯ್ಯದ್ ರಕೀಬ್ ಅಹಮದ್:

https://youtu.be/9WNSXffLR-g

Day 4: 9th:  ಅಳತೆ ಮತ್ತು ಏಕಮಾನಗಳು: ಚನ್ನಪ್ಪ.ಕೆ.ಎಂ ಮತ್ತು ಸುನೀತಾ:

https://youtu.be/fZ5JOkXFZoc

Day 8: 9th: ಬಲ, ಚಲನೆ, ಬೆಳಕು: ಸಯ್ಯದ್ ರಕೀಬ್ ಅಹಮದ್:  https://youtu.be/AyhWleU5ZEc

Day 9: 9th:  ಜೀವಿಗಳಲ್ಲಿ ವೈವಿಧ್ಯತೆ: ಲಕ್ಷ್ಮಿ ನಾರಾಯಣ ಶೆಟ್ಟಿ https://youtu.be/SFEt5TCPSSI

Day 1: 10th : ವಿಜ್ಞಾನಕ್ಕೆ ಪೀಠಿಕೆ: ರಾಮಚಂದ್ರ ಭಟ್ ಮತ್ತು ಸಯ್ಯದ್ ರಕೀಬ್ ಅಹಮದ್:

 https://youtu.be/dZBUs2ieQW4

Day 2: 10th: ಅಳತೆ ಮತ್ತು ಏಕಮಾನಗಳು: ಚನ್ನಪ್ಪ.ಕೆ.ಎಂ

https://youtu.be/CEx9vI88KiQ

Day 4: ಬೆಳಕು: ಚೆನ್ನಪ್ಪ.ಕೆ.ಎಂ. ಹಾಗೂ ರಾಮಚಂದ್ರ ಭಟ್: 10th: https://youtu.be/8CQYTJQQ5EY

Day 6: ರಾಸಾಯನಿಕ ಕ್ರಿಯೆ ಮತ್ತು ಆಮ್ಲಗಳು: ಲಕ್ಷ್ಮಿ ನಾರಾಯಣ ಶೆಟ್ಟಿ ಹಾಗೂ ಪದ್ಮಾವತಿ Padmavathi Radhakrishna: https://youtu.be/qRqYOQWFCFU

10th: Day 7 : ಕೆಲಸ ಮತ್ತು ಶಕ್ತಿ, ನೈಸರ್ಗಿಕ ಸಂಪನ್ಮೂಲ.: ವಿಜಯ್ ಕುಮಾರ್: 10th: https://youtu.be/676O6u2sxw4

Day 10:  ನೈಸರ್ಗಿಕ ಸಂಪನ್ಮೂಲ ಮತ್ತು ಪರಿಸರ: 10th: https://youtu.be/bI8wMPwpwT8

Friday, August 14, 2020

chandana TV bridge course

Day 18 Aug 13 2020







Day 20 :  Aug 14 2020


ಆಹಾ ! ಗುಲಗಂಜಿ ಎಂಬ ವಿಷಕನ್ಯೆ !!

 

ಆಹಾ ! ಗುಲಗಂಜಿ ಎಂಬ ವಿಷಕನ್ಯೆ !!

2018 ರ ಬಿ.ಜಿ.ಎಲ್ ಸ್ವಾಮಿಯವರ ಜನ್ಮ ಶತಮಾನೋತ್ಸವದ 

ಸಂದರ್ಭದಲ್ಲಿ , ಆದಿ ಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ಶಿಕ್ಷಕರ ತರಬೇತಿಯ ನೆನೆಪುಗಳನ್ನು ಮೆಲುಕು ಹಾಕುತ್ತಾ ಬರೆದ ಲೇಖನ


ಕನ್ನಡದ ಬಾವುಟವನ್ನು ಮುಗಿಲೆತ್ತರಕ್ಕೆ ಒಯ್ದ ಕನ್ನಡದ ಕಸ್ತೂರಿ ಕಂಪನ್ನು ಜಗದಗಲಕೆ ಪಸರಿಸಿದ ಭಾರತದ ಹೆಮ್ಮೆಯ ಸಸ್ಯಶಾಸ್ತಜ್ಞ ಡಾ: ಬಿ.ಜಿ.ಎಲ್ ಸ್ವಾಮಿಯವರು ತಮ್ಮ ಜೀವಿತಾವಧಿಯನ್ನು ಹಸಿರುಹೊನ್ನಿನ ಅಧ್ಯಯನದಲ್ಲಿ ತೊಡಗಿಸಿಕೊಂಡು ಪಂಡಿತರಿಗೋಸ್ಕರ ಮಾತ್ರವೇ ಎನ್ನಬಹುದಾದ ಸಸ್ಯಶಾಸ್ತçವನ್ನು ಉಲ್ಲಾಸದಾಯಕವಾಗಿಸಿ ಪಾಮರರೆಡೆಗೆ ಒಯ್ದು ಸಾಹಿತ್ಯಕ್ಕೆ ಹೊಸಭಾಷ್ಯವನ್ನು ಬರೆದರು. ಸಾಕ್ಷಾತ್ಕಾರದ ಹಾದಿಯನ್ನು ಹಾಕಿಕೊಟ್ಟ ಇಂತಹ ಸಾಹಿತಿವಿಜ್ಞಾನಿಯ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಕಿರು ಲೇಖನದ ಮೂಲಕ ಬಿ.ಜಿ.ಎಲ್ ಸ್ವಾಮಿಯವರ ಚರಣಗಳಿಗೆ ನುಡಿನಮನಗಳನ್ನು ಸಲ್ಲಿಸುತ್ತಿದ್ದೇನೆ.


 

ಕಾಲಭೈರವೇಶ್ವರ ಸ್ವಾಮಿಯ ನೆಲೆವೀಡಾದ ಆದಿಚುಂಚನಗಿರಿಯ ಹಸಿರು ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ಹಸಿರು ಹೊದ್ದ ಭೂರಮೆಯ ಸೌಂದರ‍್ಯವನ್ನು ಮಳೆಯ ತುಂತುರು ಇಮ್ಮಡಿಸಿತ್ತು. ಮೂಡಣದಲ್ಲಿ ಅರುಣನೆದ್ದು ಬೆಳ್ಳನೆಯ ಬೆಳಗನ್ನು ಚೆಲ್ಲುವ ಹೊತ್ತನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಇಂತಿಪ್ಪ ಇಳೆಯ ಮಡಿಲಿಗೆ ಮಳೆಯೊಡನೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವಿಜ್ಞಾನ ಸಂಪನ್ಮೂಲ ಶಿಕ್ಷಕರು ಹೆಚ್ಚಿನ ತರಬೇತಿಗಾಗಿ ಆಗಮಿಸಿದ್ದರು. ರಾಜ್ಯಮಟ್ಟದ ಈ ತರಬೇತಿಯನ್ನು ಹೆಚ್ಚು ಅರ್ಥಪೂರ್ಣಗೊಳಿಸುವ ಹಾಗೂ ಆಕರ್ಷಣೀಯ ವಾಗಿಸುವ ಉದ್ದೇಶದಿಂದ ನಾವು ವೈವಿಧ್ಯಮಯ ಚಟುವಟಿಕೆಗಳನ್ನು ರೂಪಿಸಿಕೊಂಡಿದ್ದೆವು. ಅವುಗಳಲ್ಲಿ ಸ್ಥಳೀಯ ಪರಿಸರದ ಅಧ್ಯಯನವನ್ನೂ ಸೇರಿಸಿದ್ದೆವು.

ಸ್ಥಳೀಯ ಸಸ್ಯಪ್ರಬೇಧಗಳ ಅಧ್ಯಯನ, ಹೆಜ್ಜೆ ಗುರುತಿನ ಮೂಲಕ ಪ್ರಾಣಿಗಳನ್ನು ಗುರುತಿಸುವುದು, ಕೀಟಗಳ ಅಧ್ಯಯನ ಮೊದಲಾದವನ್ನೊಳಗೊಂಡ ಪರಿಸರ ಅಧ್ಯಯನವು ಜೀವಿಗಳ ನಡುವಣ ಪರಸ್ಪರಾವಲಂಬನೆಯ ಜೊತೆಗೆ ನಿಸರ್ಗದೊಡಲ ಸಂಕೀರ್ಣತೆಯನ್ನು ಅನಾವರಣಗೊಳಿಸುತ್ತದೆ.

ಅರುಣನ ಆಗಮನಕ್ಕೂ ಮೊದಲೇ ತುಂತುರು ಸೋನೆಮಳೆಯಲ್ಲಿ ಆರುಗಂಟೆಗೇ ಸಾಕಷ್ಟು ಸಂಖ್ಯೆಯಲ್ಲಿ ಆಸಕ್ತ ಶಿಕ್ಷಕರು ಬೆಟ್ಟದ ಮೇಲೆ ನಮ್ಮ ನಿರೀಕ್ಷೆಯಲ್ಲಿದ್ದರು. ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಸ್ಯ ಪ್ರಬೇಧಗಳನ್ನು ಗುರುತಿಸಲು ಸಹಾಯ ನೀಡುವ ಮೊಬೈಲ್ ಆ್ಯಪ್ ಬಗ್ಗೆ ತಿಳಿಸುತ್ತಾ ವೈಜ್ಞಾನಿಕ ಹೆಸರುಗಳಿಂದ ಸಸ್ಯಗಳನ್ನು ಗುರುತಿಸುತ್ತಾ ಚರ್ಚಿಸುತ್ತಾ ಸಾಗಿದೆವು. ಬಂಡೆ ಏರಿ ತಗ್ಗು ಇಳಿದು ಜೀವವೈವಿಧ್ಯವನ್ನು ಅರಿಯುತ್ತಾ ಮುಂದುವರೆದೆವು.

ಇದ್ದಕ್ಕಿದ್ದಂತೆ ಬಂಡೆಯೊಂದರ ಹಿಂದಿನಿಂದ ಸುಂದರವಾದ ಆಕರ್ಷಕ ಕೆನ್ನೆತ್ತರ ಬಣ್ಣದ ಬೀಜಗಳು ನನ್ನನ್ನು ಕೈಬೀಸಿ ಕರೆದಂತಾಯ್ತು. ಸಸ್ಯಸಂಕುಲ ವೃದ್ಧಿಗೆ ನಿಸರ್ಗದೊಡನೆಯ ಬೇಟದ ಅನಾವರಣ .

ಬಂಡೆ ಏರಿ ನಿಧಾನವಾಗಿ ಅವಲೋಕಿಸಿದರೆ ಬಳ್ಳಿಯೊಂದು ಆಕರ್ಷಕ ಬೀಜಗಳ ಮೂಲಕ ತನ್ನ ಸೌಂದರ್ಯ ಅಸ್ವಾದನೆಗೆ ಕೈಬೀಸಿ ಕರೆದಂತಾಯಿತು .ಅಷ್ಟರಲ್ಲಿ ಬಂಡೆ ಏರಿದ ವಿಜಯಪುರದ ಕೆಲ ಸ್ನೇಹಿತರು ಭಟ್ರೇ ಇದು ಗುಲಗಂಜಿ ಇದರ ಎಲೆಗಳನ್ನು ತಿನ್ನಿ ಎನ್ನುತ್ತಾ ಎಲೆಗಳನ್ನು ತಾವು ಸವಿಯುತ್ತಾ ನನಗೆ ಕೆಲವು ಎಲೆಗಳನ್ನು ನೀಡಿದರು. ಮೊದಲಿಗೆ ಸ್ವಲ್ಪ ಒಗರೆನಿಸಿತು. ನಂತರ ನಿಧಾನಕ್ಕೆ ಎಲೆಗಳು ಅತಿ ಸಿಹಿಯ ರುಚಿಯನ್ನು ನೀಡಿದವು. ಅರ್ಧತಾಸು ಕಳೆದರೂ ಸಿಹಿಯ ರುಚಿ ಹಾಗೇ ಇತ್ತು. ಆದ್ಭುತ ಎನಿಸಿದ ಈ ಸಕ್ಕರೆಯ ಎಲೆಗಳು ನಮ್ಮೆಲ್ಲರಿಗೂ ಅಚ್ಚರಿಯನ್ನು ಉಂಟುಮಾಡಿದವು. ಸ್ಟೀವಿಯ ಎಲೆಗಳ ಸಿಹಿ ಹಾಗೂ ನೆಲ್ಲಿಕಾಯಿ ತಿಂದು ನೀರುಕುಡಿದಾಗ ಆಗುವ ಅನುಭವವನ್ನು ನೆನಪಿಗೆ ತಂದಿತು. ಆಗ ಪಾಟೀಲರು ನೀವು ಈಗ ನೀರು ಕುಡಿದರೆ ಸಿಹಿಯ ಅನುಭವ ಇನ್ನೂ ಹೆಚ್ಚಾಗುತ್ತದೆ ಎಂದರು. ಇನ್ನೊಬ್ಬ ಸ್ನೇಹಿತರು, ನಮ್ಮಲ್ಲಿ ಇವುಗಳನ್ನು ಸ್ವೀಟ್ ಪಾನ್‌ಬೀಡಾದಲ್ಲಿ ಬಳಸುತ್ತಾರೆ ಎನ್ನುವ ಮಾಹಿತಿ ಒದಗಿಸಿದರು.


ಇದು ಗುಲಗಂಜಿ ಎಂದಾಗ ಮತ್ತಷ್ಟು ಅಚ್ಚರಿಯಾಯಿತು. ದಕ್ಷಿಣ ಕನ್ನಡ , ಕೊಡಗು, ಕಾಸರಗೋಡು ಪರಿಸರದಲ್ಲಿ ಹೇರಳವಾಗಿರುವ ಮಂಜೊಟ್ಟಿ ಎಂದು ಕರೆಯಲಾಗುವ ದೊಡ್ಡ ಗುಲಗಂಜಿ ಅಥವಾ ರೆಡ್ ಸ್ಯಾಂಡಲ್ ಅಥವಾ ಆನೆ ಗುಲಗಂಜಿ ಎಂದು ಕರೆಯಲಾಗುವ ಸಸ್ಯವನ್ನೇ ಗುಲಗಂಜಿ ಎಂದು ಇಲ್ಲಿಯವರೆಗೂ ನಾನು ಭಾವಿಸಿದ್ದೆ.


Adenanthera povinina  ಎಂಬ ಹೆಸರಿನಿಂದ ಕರೆಯುವ ಮಂಜೊಟ್ಟಿ ಬಹುವಾರ್ಷಿಕ ದ್ವಿದಳ ಸಸ್ಯವಾಗಿದ್ದು ಇದರ ಬೀಜಗಳನ್ನು ಸಾಮಾನ್ಯವಾಗಿ ಚನ್ನಮಣೆ ಅಥವಾ ಅಳಗುಳಿಮನೆ ಆಟದಲ್ಲಿ ಬಳಸುತ್ತಾರೆ. ಮಂಜೊಟ್ಟಿಯಲ್ಲಿ ಅನೇಕ ಔಷಧೀಯ ರಾಸಾಯನಿಕಗಳಿದ್ದು, ಇವು ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿವೆ. ಕೇರಳದಲ್ಲಿ ಮಂಜೊಟ್ಟಿ ಕೃಷಿ ಲಾಭದಾಯಕ ಕೃಷಿ ಉದ್ಯಮವಾಗಿ ಬೆಳೆಯುತ್ತಿದೆ. ಮರಮಟ್ಟುಗಳು ಬಹು ಉಪಯೋಗಿ. ಕೆನ್ನೆತ್ತರ ಬಣ್ಣದ ಬೀಜಗಳು ಆಭರಣ ತಯಾರಿಕೆಯಲ್ಲಿ ಅಳತೆ ಮಾನಗಳಾಗಿ ಉಪಯೋಗಿಸಲ್ಪಟ್ಟಿವೆ. ಹಾಗೆಯೇ ತಾಳವಾದ್ಯಗಳಲ್ಲೂ ಬೀಜಗಳನ್ನು ಬಳಸುತ್ತಾರೆ.







ಅಪೂರ್ವ ಸೌಂದರ್ಯದೊಂದಿಗೆ ಆಧಾರ ಗಿಡದ ನಡುವಿನಿಂದ ಲಾಸ್ಯವಾಡುತ್ತಿದ್ದ ಗುಲಗಂಜಿ ಬಳ್ಳಿಯ ಹಿಂದೆ ಪತ್ತೆದಾರಿಕೆ ಮಾಡಲು ಹೊರಟಾಗ ನನಗೆ ಅನೇಕ ಅಪೂರ್ವ ಮಾಹಿತಿಗಳು ದೊರೆತವು.

ಅಬ್ರಸ್ ಪ್ರಿಕಟೋರಿಯಸ್ (Abrus precatorius ) ಎಂದು ವೈಜ್ಞಾನಿಕವಾಗಿ ಗುರುತಿಸಲ್ಪಡುವ ಪಾಶ್ಚಾತ್ಯ ದೇಶಗಳಲ್ಲೂ ಕಂಡುಬರುವ ಇದು ಭಾರತೀಯ ಮೂಲದ ಸಸ್ಯವಾಗಿದೆ. ಗುಲಗಂಜಿ ಸಸ್ಯ ಸಾಮ್ರಾಜ್ಯದ ಆವೃತಬೀಜಸಸ್ಯ ವರ್ಗದ ಫೆಬೇಸಿ ಎಂಬ ಕುಟುಂಬಕ್ಕೆ ಸೇರಿದೆ. ಚೂಡಾಮಣಿ, ಶಿಖಂಡಿಕಾ, ಚಕ್ರಶಲ್ಯ, ಶ್ವೇತ ಕಾಂಭೋಜಿ ಮೊದಲಾದ ಸಂಸ್ಕೃತನಾಮಗಳಿಂದ ಕರೆಲ್ಪಡುವ ಗುಲಗಂಜಿಯಲ್ಲಿ ಪ್ರಮುಖವಾಗಿ ಬಿಳಿ ಹಾಗೂ ಕೆಂಪು ಬಣ್ಣದ ಬೀಜಗಳನ್ನು ಉತ್ಪಾದಿಸುವ 2 ವಿಧಗಳಿವೆ. ಬಳ್ಳಿಯಲ್ಲಿ 10 ಸೆ,ಮೀ ಉದ್ದದ ಪ್ರತಿಯೊಂದು ಸಂಯುಕ್ತಪತ್ರದಲ್ಲಿ 12-20 ಜೊತೆ ಕಿರು ಎಲೆಗಳನ್ನು ನೋಡಬಹುದು. ಕೆಂಪು ಗುಲಗಂಜಿಯಲ್ಲಿ ಪಾಡ್ ಎನ್ನಲಾಗುವ ಕಾಯಿಯಲ್ಲಿ 3-6 ರಕ್ತವರ್ಣದ ಬೀಜಗಳನ್ನು ನೋಡಬಹುದು. ಬೀಜಗಳ ತೂಕವು ಹೆಚ್ಚು ಕಡಿಮೆ ಒಂದೇ ರೀತಿ ಇದ್ದು ಒಂದು ರತ್ತಿ (ratti) ಅಂದರೆ ಸುಮಾರು 125 ಮಿ.ಗ್ರಾಮ್ ನಷ್ಟು ತೂಗುತ್ತದೆ. 

ಅಚ್ಚರಿ ಎಂದರೆ ನಿಸರ್ಗ ಅದೆಷ್ಟು ನಿಖರತೆಯನ್ನು ಹೊಂದಿದೆ ಎನ್ನಲು ಬೀಜಗಳ ಏಕರೂಪದ ತೂಕವೇ ಸಾಕ್ಷಿ. ಆದ್ದರಿಂದಲೇ ಭಾರತೀಯರು ಗುಲಗಂಜಿಯನ್ನು ಬಂಗಾರದಂತಹ ಅಮೂಲ್ಯ ವಸ್ತುಗಳನ್ನು ತೂಕಹಾಕಲು ಬಳಸುತ್ತಿದ್ದರು. ಎಂಟು ರತ್ತಿಗಳು ಸೇರಿ ಒಂದು ಮಾಷ, 12 ಮಾಷಗಳು ಸೇರಿದರೆ ಒಂದು ತೊಲವಾಗುತ್ತದೆ. ತೊಲ ಎಂದರೆ ಸುಮಾರು 11.6 ಗ್ರಾಮ್‌ಗಳಿಗೆ ಸಮ.

ಪುರಾಣ ಕಾಲದಿಂದಲೂ ಜನಪದಗಳಲ್ಲಿ ಬೆರೆತು ಹೋದ ಗುಲಗಂಜಿ ಐತಿಹಾಸಿಕ, ಸಾಮಾಜಿಕ, ಸಾಂಸೃತಿಕ ಪರಂಪರೆಯ ಪ್ರತೀಕವಾಗಿದ್ದು ಕೆಲವೊಮ್ಮೆ ಖಳನಾಯಕನ ಅವತಾರದಲ್ಲೂ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.

ಏಡಿಯ ಕಣ್ಣು , ಪ್ರಾರ್ಥನಾಮಣಿ , ಗುಂಜಿ ಮೊದಲಾದ ಹಲವಾರು ಹೆಸರುಗಳಿಂದ ಪರಿಚಿತವಾದ ಗುಲಗಂಜಿಯ ಕುರಿತು ಅನೇಕ ಐತಿಹ್ಯಗಳಿವೆ.

ಗುಲಗಂಜಿಯ ಆಕರ್ಷಕ ರಕ್ತವರ್ಣದ ಹೊಳಪು 30 ವರ್ಷಗಳವರೆಗೂ ಮಾಸದೇ ಉಳಿಯುವುದರಿಂದ ಇದರಿಂದ ತಯಾರಿಸಲಾದ ಆಭರಣಗಳು ಹೆಂಗಳೆಯರ ಮನಸೂರೆಗೊಂಡಿದ್ದವು. ಈ ಆಭರಣಗಳನ್ನು ಧರಿಸುವುದೂ ಪ್ರತಿಷ್ಟೆಯಾಗಿತ್ತು.

19ನೇ ಶತಮಾನದಲ್ಲಿ ಇಂಗ್ಲೆಂಡ್‌ನ ಕುಲೀನ ಸ್ತ್ರೀಯರಲ್ಲಿ ಇದ್ದಕ್ಕಿದ್ದಂತೆ ರೋಗವೊಂದು ಕಾಣಿಸಿಕೊಂಡಿತು.ಇದ್ದಕ್ಕಿದ್ದಂತೆ ಹೊಟ್ಟೆನೋವು, ವಾಂತಿ - ಬೇಧಿ, ನಿಶ್ಯಕ್ತಿಗಳಿಂದ ಬಳಲರಾಂಭಿಸಿದರು. ಇದಕ್ಕೆ ಕಾರಣ ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿತ್ತು. ಕೂಲಂಕುಶ ಅಧ್ಯಯನದ ನಂತರ ಗುಲಗಂಜಿಯ ಆಭರಣ ಧರಿಸುತ್ತಿದ್ದ ಸ್ತ್ರೀಯರಲ್ಲಿ ಮಾತ್ರ ಈ ಲಕ್ಷಣಗಳು ಸಾಮಾನ್ಯವಾಗಿರುವುದು ಕಂಡುಬಂತು. ಈ ಸ್ತ್ರೀರು ಆಭರಣದಲ್ಲಿದ್ದ ಗುಲಗಂಜಿ ಬೀಜಗಳನ್ನು ಚೀಪುವ ಅಭ್ಯಾಸವನ್ನು ಹೊಂದಿದ್ದರು. ಗುಲಗಂಜಿಯ ಕಾರ್ಕೋಟಕ ವಿಷವಾದ ಅಬ್ರಿನ್ ಎಂಬ ರಾಸಾಯನಿಕವೇ ಇದಕ್ಕೆ ಪ್ರಮುಖ ಕಾರಣ ಎಂದು ಕಂಡುಕೊಂಡ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ನಾರಿಯರನ್ನು ವಿಚಿತ್ರ ರೋಗಲಕ್ಷಣಗಳಿಂದ ಮುಕ್ತಗೊಳಿಸಿದರು.

            1881ರ ಬ್ರಿಟಿಷ್ ಬಂಗಾಳದ ಜಿಲ್ಲಾ ಪೋಲಿಸ್ ಅಧೀಕ್ಷಕರ ವರದಿಯ ಪ್ರಕಾರ ಇದನ್ನು ಆಯುಧಗಳಲ್ಲಿ ಬಳಸುತ್ತಿರುವುದು ತಿಳಿದು ಬರುತ್ತದೆ. ಬುಡಕಟ್ಟು ಜನರು ಗುಲಗಂಜಿಯ ಬೀಜಗಳಿಂದ ತಯಾರಿಸಿದ ಲೇಪನವನ್ನು ಆಯುಧಗಳಿಗೆ ಸವರಿ ಒಣಗಿಸಿ ಅವುಗಳನ್ನು ಬೇಟೆಯಾಡಲು ಬಳಸುತ್ತಿದ್ದರೆಂಬುವುದು ಇತಿಹಾಸದ ದಾಖಲೆಗಳಿಂದ ತಿಳಿಯುತ್ತದೆ. ಈ ವಿಷವನ್ನು ಬಳಸಿ ತಮ್ಮ ಹುಲ್ಲುಗಾವಲುಗಳಿಗೆ ನುಗ್ಗಿದ ವಿರೋಧಿಗಳ ಪಶುಗಳನ್ನು ಸಾಯಿಸುತ್ತಿದ್ದರಂತೆ. ಅದೇರೀತಿ ವಿರೋಧಿಗಳ ಜೀವಹರಣಕ್ಕೂ ಬಳಸುತ್ತಿದ್ದರಂತೆ.

ಗುಲಗಂಜಿಯಲ್ಲಿ ಅನೇಕ ಅತ್ಯಮೂಲ್ಯ ಅಲ್ಕಲೈಡ್‌ಗಳಿರುವುದರಿಂದ ಅದು ಔಷಧಿಗಳ ಗಣಿಯಾಗಿದೆ.  ಅಬ್ರಿನ್, ಅಬ್ರಿಕ್ ಆಮ್ಲ ,ಪ್ರಿಕೋಲ್ , ಅಬ್ರೋಲ್, ಅಬ್ರಸೀನ್, ಪ್ರಿಕಸೀನ್ , ಅಬ್ರಸ್ ಲ್ಯಾಕ್ಟೋನ್ , ಟ್ರಿಪ್ಟೋಫ್ಯಾನ್, ಹೆಡೆರಾಜೆನಿನ್ ಮೊದಲಾದ ಅನೇಕ ರಾಸಾಯನಿಕಗಳಿದ್ದು ಹತ್ತು ಹಲವು ರೋಗಗಳಲ್ಲಿ ಔಷಧಿಯಾಗಿ ಬಳಸಲ್ಪಡುತ್ತಿದೆ. ಸಂತಾನ ನಿಯಂತ್ರಣ, ಸಂಧಿವಾತ, ಜ್ವರ , ಚರ್ಮರೋಗ, ಮಾನಸಿಕ ಕಾಯಿಲೆಗಳು, ಅಲ್ಸರ್, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ನೆಗಡಿ ಹೀಗೆ ಅನೇಕ ಸಮಸ್ಯೆಗಳಿಗೆ ಗುಲಗಂಜಿಯ ಬೇರು, ಬೀಜ , ಎಲೆಗಳು ರಾಮಬಾಣವಾಗಿವೆ.

 ಅತಿಯಾದರೆ ಅಮೃತವೂ ವಿಷ ಎಂದ ಮೇಲೆ ಗುಲಗಂಜಿ ಇದರಿಂದ ಹೇಗೆ ಹೊರತಾದೀತು? ಹೀಗೆ ಕೆಲವೊಮ್ಮೆ ಹೀರೋ ಆಗಿ ಇನ್ನು ಕೆಲವು ಸಲ ವಿಲನ್ ಆಗಿ ಮೆರೆಯುತ್ತಿರುವ ಗುಲಗಂಜಿಯ ಮಹಿಮೆ ಅಪಾರವಾದದ್ದು. ಹಾಗಾಗಿ ಬಳುಕುವ ಕನ್ಯೆ ಗುಲಗಂಜಿಯ ಬಗ್ಗೆ ಎಚ್ಚರವಿರಲಿ.





Sunday, August 9, 2020

ಶಿಕ್ಷಣ ಕ್ಷೇತ್ರದ ನೂತನ ಮೈಲಿಗಲ್ಲು ಪರೀಕ್ಷಾವಾಣಿ blog date : 30-06-2020

 

ಶಿಕ್ಷಣ ಕ್ಷೇತ್ರದ ನೂತನ ಮೈಲಿಗಲ್ಲು ಪರೀಕ್ಷಾವಾಣಿ

 ಮಾನ್ಯ ಸಚಿವರ ಆದೇಶದಂತೆ ಏಪ್ರಿಲ್ ತಿಂಗಳ 29 ನೇ ತಾರೀಖಿನಿಂದ ಕನ್ನಡ ಮಾಧ್ಯಮದಲ್ಲಿ ಪ್ರಾರಂಭಗೊಂಡು 

ತದ ನಂತರ ಆಂಗ್ಲಮಾಧ್ಯಮದಲ್ಲಿ ಮೇ 9ರಂದು ಪ್ರಾರಂಭಗೊಂಡು SSLC ಪರೀಕ್ಷಾವಾಣಿಯು ಒಂದು ತಿಂಗಳ ಕಾಲ ಪರೀಕ್ಷೆ ಆರಂಭಗೊಳ್ಳುವವರೆಗೂ ಪುನರ್ಮನನ ತರಗತಿಗಳನ್ನು ಒದಗಿಸಲಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಲ್ಲೂ ಪುನರ್ಮನನ ತರಗತಿಗಳನ್ನು ಉಚಿತವಾಗಿ ಲಭ್ಯವಾಗಿಸುವಂತೆ ನೀಡಿ ಲಾಕ್ ಡೌನ್ ಅವಧಿಯಲ್ಲಿ ಹತಾಶೆಗೊಳಗಾದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಹೊಸ ಸಾಧ್ಯತೆಗಳ ಲೋಕವನ್ನೇ ತೆರೆದಿದೆ.

ಚಂದನವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಡಿ.ಎಸ್.ಇ.ಆರ್.ಟಿ ಪ್ರಾಯೋಜಿತ ಕಾರ್ಯಕ್ರಮವು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗೆ ಕೋವಿಡ್ -19 ನ ಕಗ್ಗತ್ತಲ ಲೋಕದಲ್ಲಿ ಮುಳುಗಿರುವ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಮೌನಕ್ರಾಂತಿಗೆ ಹೊಸಭಾಷ್ಯವನ್ನೇ  ಬರೆದಿದೆ. ಮಕ್ಕಳವಾಣಿ ಮತ್ತು ಪರೀಕ್ಷಾವಾಣಿಗಳೆರಡನ್ನೂ ಏಕಕಾಲದಲ್ಲಿ ಪ್ರಸಾರವಾಗುವಂತೆ ನೋಡಬೇಕಾಗಿದ್ದ ಅನಿವಾರ್ಯತೆಯಲ್ಲಿ, ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಎರಡು ದೋಣಿಗಳಲ್ಲಿ ಕಾಲಿಟ್ಟು ಎರಡನ್ನೂ ಅಷ್ಟೇ. ಆಸ್ಥೆಯಿಂದ ದಡ ಸೇರಿಸುವ ಸವಾಲಿನ ನಡುವೆ ಯಶೋ ಗಾಥೆಯೊಂದು ಮೂಡಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಮಾನ್ಯ ಪ್ರಧಾನ ಕಾರ್ಯದರ್ಶಿಯವರು, ಮಾನ್ಯ ಶಿಕ್ಷಣ ಆಯುಕ್ತರು ಹಾಗೂ ಮಾನ್ಯ ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಡಿ.ಎಸ್.ಇ.ಆರ್.ಟಿಯ ಮಾನ್ಯ ನಿರ್ದೇಶಕರುಗಳ ಮಾರ್ಗದರ್ಶನದಲ್ಲಿ ಹಗಲಿರುಳು ಕಾರ್ಯನಿರ್ವಹಿಸಿದ ತಂತ್ರಜ್ಞರು, ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳೆಲ್ಲರ ಸಮರ್ಪಣಾ ಮನೋಭಾವದಿಂದ ಪರೀಕ್ಷಾವಾಣಿ ಎಂಬ ಕನಸು ನನಸಾಗಿದೆ.

     ಮೊದಲಿಗೆ ಗಣಿತ, ವಿಜ್ಞಾನಗಳೊಂದಿಗೆ ಕನ್ನಡ ಮಾಧ್ಯಮದಲ್ಲಿ ಆರಂಭಗೊಂಡು ಪುನರ್ಮನನ ತರಗತಿಗಳು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅಪಾರ ನಿರೀಕ್ಷೆಗಳನ್ನು ಹುಟ್ಟು ಹಾಕಿತು.  ವಿದ್ಯಾರ್ಥಿಗಳು ಮತ್ತು ಪೋಷಕರ ಒತ್ತಾಸೆಯಂತೆ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್‌ರವರ ನಿರ್ದೇಶನದಂತೆ ಆಂಗ್ಲ ಮಾಧ್ಯಮದಲ್ಲೂ ಮೇ ತಿಂಗಳ 9ನೇ ತಾರೀಖಿನ ಪೂರ್ವಾಹ್ನ 9:30 ರಿಂದ ಪರೀಕ್ಷಾವಾಣಿಯ ತರಗತಿಗಳು ಪ್ರಾರಂಭಗೊಂವು. ಗಣಿತ ವಿಜ್ಞಾನಗಳಲ್ಲದೇ ಸಮಾಜ, ಪ್ರಥಮಭಾಷೆ, ದ್ವಿತೀಯಭಾಷೆ ಹಾಗೂ ತೃತೀಯ ಭಾಷೆಗಳಲ್ಲೂ ಕಾರ್ಯಕ್ರಮ ಸಿದ್ಧಗೊಂಡಿದೆ. ಪ್ರತೀಪಾಠಗಳ ಪುನರ್ಮನನ ತರಗತಿಗಳ ಜೊತೆಗೆ ವಿಜ್ಞಾನದ ಪ್ರಯೋಗಗಳ ಮೂಲಕ ಸರಳವಾಗಿ ಪರಿಕಲ್ಪನೆಯನ್ನು ಅರ್ಥೈಸಲಾಗುತ್ತಿದೆ. ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಯಾವ ಪ್ರಶ್ನೆಗಳಿಗೆ ಹೇಗೆ ಮತ್ತು ಯಾವ ರೀತಿಯಲ್ಲಿ ಎಷ್ಟು ಉತ್ತರ ಬರೆಯಬೇಕು, ಸಮಯಪಾಲನೆ, ಉನ್ನತ               ಲೋಚನಾ ಕೌಶಲವುಳ್ಳ ಪ್ರಶ್ನೆಗಳನ್ನು ವಿಶ್ಲೇಷಿಸಿ ಉತ್ತರಿಸುವ ಕೌಶಲಗಳು, ಬದಲಾದ ಪರೀಕ್ಷಾ ವಿಧಾನ ಮೊದಲಾದ ಮಾಹಿತಿಗಳನ್ನು ತಜ್ಞ ಅನುಭವಿ ಶಿಕ್ಷಕರು ಎಲ್ಲಾ ವಿಷಯಗಳಲ್ಲೂ ಮಾರ್ಗದರ್ಶನ ನೀಡಲಿದ್ದಾರೆ.

 ದೂರದರ್ಶನದ ಚಂದನ ವಾಹಿನಿಯಲ್ಲಿ ಕನ್ನಡ ಮಾಧ್ಯಮದ ತರಗತಿಗಳು ಪ್ರತಿದಿನವೂ ಮಧ್ಯಾಹ್ನ 3 ರಿಂದ 4:30ರವರೆಗೆ ಪ್ರಸಾರಗೊಳ್ಳುತ್ತಿವೆ. ಅಲ್ಲದೆ ಮರುದಿನ ಬೆಳಗ್ಗೆ 6 ರಿಂದ 7:30 ರವರೆಗೆ ಮರುಪ್ರಸಾರಗೊಂಡರೆ, ಆಂಗ್ಲ ಮಾಧ್ಯಮದ ತರಗತಿಗಳು ಬೆಳಗ್ಗೆ 9:30 ರಿಂದ 11:00 ರವರೆಗೆ ಪ್ರಸಾರಗೊಳ್ಳುತ್ತಿವೆ. ಈ ತರಗತಿಗಳ ಮರುಪ್ರಸಾರವು ಅದೇ ದಿನ ರಾತ್ರಿ 11:00 ರಿಂದ 12:30 ರವರೆಗೆ ನಡೆಯುತ್ತಿದ್ದು ಲಕ್ಷಾಂತರ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಇದಲ್ಲದೆ ಡಿ.ಎಸ್.ಇ.ಆರ್.ಟಿ.ಯ ಯೂ-ಟ್ಯೂಬ್ ಚಾನಲ್ ಜ್ಞಾನದೀಪ, ಮಕ್ಕಳವಾಣಿ ಹಾಗೂ ಚಂದನವಾಹಿನಿಯ ಯೂ–ಟ್ಯೂಬ್ ಚಾನಲ್‌ಗಳಲ್ಲೂ ಈ ಪಾಠಗಳು ವೀಕ್ಷಣೆಗೆ ಲಭ್ಯವಿದ್ದು 3 ಲಕ್ಷಕ್ಕೂ ಹೆಚ್ಚಿನ ಪ್ರೇಕ್ಷಕರಿಂದ ವೀಕ್ಷಣೆಗೊಳಗಾಗಿ ಅಪಾರ ಜನಮನ್ನಣೆಗೆ ಪಾತ್ರವಾಗಿವೆ.  

     ಈ ಕಾರ್ಯಕ್ರಮವನ್ನು ತರಾತುರಿಯಲ್ಲಿ ಮಾಡಬೇಕಾಗಿ ಬಂದಾಗ ಎದುರಿಗಿದ್ದ ಅಡೆತಡೆಗಳು ನೂರಾರು. ಲಾಕ್ಡೌನ್ ಸಂದರ್ಭದಲ್ಲಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳನ್ನು ಕಲೆಹಾಕುವುದು, ತರಗತಿಗೆ ಬೇಕಾದ ಪವರ್ ಪಾಯಿಂಟ್ ತಯಾರಿಕೆ, ಸಂಪನ್ಮೂಲ ವ್ಯಕ್ತಿಗಳಿಗೆ ಮಾರ್ಗದರ್ಶನ, ರೆಕಾರ್ಡಿಂಗ್, ಎಡಿಟಿಂಗ್, ತಾಂತ್ರಿಕ ಸಹಕಾರ ಇತ್ಯಾದಿಗಳನ್ನು ಸಮರ್ಪಕವಾಗಿ ಪರೀಕ್ಷಾವಾಣಿಗೆ ಒದಗಿಸುವುದರ ಜೊತೆಗೆ ಮತ್ತೊಂದು ಕೂಸಾದ ಮಕ್ಕಳವಾಣಿಗೂ   ಒದಗಿಸಬೇಕಾಗಿತ್ತು. ಮಾನ್ಯ ರಾಜ್ಯಯೋಜನಾ ನಿರ್ದೇಶಕರು ಹಾಗೂ ಡಿ.ಎಸ್.ಇ.ಆರ್.ಟಿ.ಯ ನಿರ್ದೇಶಕರ ಸಲಹೆ ಸೂಚನೆಗಳ ಅನ್ವಯ ಕಾರ್ಯ ಪ್ರಾರಂಭಗೊಂಡಿತು. ಪ್ರತಿಯೊಂದು ಹಂತದಲ್ಲೂ ಮಾನ್ಯ ನಿರ್ದೇಶಕರು ಸ್ವತಃ ಪಾಠ ಸಿದ್ಧತೆಗಳನ್ನು ಪರಿಶೀಲಿಸಿ  ಸಂಪನ್ಮೂಲ ವ್ಯಕ್ತಿಗಳಿಗೆ ಸೂಕ್ತ ಸಲಹೆಗಳನ್ನು ನೀಡಿ ರೆಕಾರ್ಡಿಂಗ್ ಮಾಡಲು ಅನುಮತಿಸುತ್ತಿದ್ದರು. ಅಷ್ಟೇ ಅಲ್ಲದೇ ನಿರ್ದೇಶಕರು  ಪ್ರತಿಯೊಂದು ತರಗತಿಯ ಪ್ರಸಾರವನ್ನು ವೈಯಕ್ತಿಕವಾಗಿ ತಾವೇ ಸ್ವತಃವೀಕ್ಷಿಸಿ ಮುಂದಿನ ದಿನದ ರೆಕಾರ್ಡಿಂಗ್ ವೇಳೆ ಅಗತ್ಯ  ಬದಲಾವಣೆಗಳನ್ನು ಸೂಚಿಸಿ ಕಾರ್ಯಕ್ರಮದ ಉತ್ಕೃಷ್ಟತೆಯನ್ನು ಹೆಚ್ಚಿಸಲು ಕಾರಣರಾದರು. 

 ಬೆಳಿಗ್ಗೆ 7 ಗಂಟೆಗೆ ಆರಂಭಗೊಳ್ಳುತ್ತಿದ್ದ ವಿಡಿಯೋ ಶೂಟಿಂಗ್ ಮತ್ತು ಎಡಿಟಿಂಗ್ ಕಾರ್ಯಗಳು ರಾತ್ರಿ 8 ರಿಂದ 9 ಗಂಟೆಯವರೆಗೂ ನಡೆದದ್ದಿದೆ. ಕರೋನ ಪೀಡೆಯ ಹಿನ್ನಲೆಯಲ್ಲಿ ಲಾಕ್ಡೌನ್, ಸಿಲ್ಡೌನ್ ಗಳ ನಡುವೆ ಭಯ –ಆತಂಕಗಳು ಕೆಲಸ ಮಾಡುವವರನ್ನು ಕಾಡಿದ್ದಿದೆ. ನಾವು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸುರಕ್ಷಾ ಕ್ರಮಗಳನ್ನು ಏರ್ಪಡಿಸಿಕೊಂಡು ಡಿ.ಎಸ್.ಇ.ಆರ್.ಟಿ.ಯಲ್ಲೇ ರಾತ್ರಿ ಉಳಿದು ಬೆಳ್ಳಂಬೆಳಗ್ಗೆ ಕಾರ್ಯನಿರ್ವಹಿಸಿದ್ದಿದೆ. ಪರಸ್ಪರ ಸಂಪನ್ಮೂಲಗಳನ್ನು ಹಂಚಿಕೊಂಡು  ಪರಾಮರ್ಶಿಸಿ, ಚರ್ಚಿಸಿ, ಕ್ಯಾಮರದ ಮುಂದೆ ನಿಂತದ್ದಿದೆ. ಊಟೋಪಚಾರಗಳ ಸಮಸ್ಯೆ ಎದುರಾದಾಗ ಸಮೀಪದಲ್ಲೇ ಮನೆಯಿದ್ದ ಸ್ನೇಹಿತರು ಕಾಫಿ-ತಿಂಡಿ ವ್ಯವಸ್ಥೆ ಮಾಡಿ ಅನ್ನದಾತರಾಗಿದ್ದಾರೆ. ಇಂತಹ ಸ್ನೇಹಿತರನ್ನು ಮರೆಯುವುದುಂಟೇ? 

ಹೀಗೆ ಅಹರ್ನಿಶಿ ಯುದ್ಧದೋಪಾದಿಯಲ್ಲಿ ಸಂಘಟಿತ ಕಾರ್ಯದಿಂದಾಗಿ ಉತ್ತಮ ಕಾರ್ಯಕ್ರಮವೊಂದು ರೂಪಿತವಾಯಿತು.


 ಚಾತಕಪಕ್ಷಿಗಳಂತೆ ಕಾಯುತ್ತಿರುವ ವಿದ್ಯಾರ್ಥಿಗಳ ಉತ್ತಮ ಪ್ರತಿಸ್ಪಂದನೆಯಿಂದಾಗಿ ಕಠಿಣ ಪರಿಸ್ಥಿತಿಯಲ್ಲಿ ನಡೆಸಿದ ಶ್ರಮ ಸಾರ್ಥಕವಾಗಿದೆ. ಎಲ್ಲರ ಮೊಗದಲ್ಲೂ ಧನ್ಯತೆಯ ಭಾವ, ಸಾಧನೆಯ ಸಂತಸ ಹೊನಲಾಗಿ ಹರಿದಿದೆ. ಮೊಬೈಲ್ ಸಂದೇಶ ಮತ್ತು ಕರೆಗಳ ಮೂಲಕ ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ. ವಾಟ್ಸಾಪ್ ಗ್ರೂಪ್‌ಗಳಲ್ಲಿ ಧನಾತ್ಮಕ ಚರ್ಚೆಗಳು ನಡೆಯುತ್ತಿವೆ.


 ದಿನೇ ದಿನೇ ಪರೀಕ್ಷಾವಾಣಿಯನ್ನು ದೂರದರ್ಶನ ಮತ್ತು ಯೂಟ್ಯೂಬ್ ಮೂಲಕ ವೀಕ್ಷಿಸುವವರ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ. ಕರೋನಾ ಕಾರ್ಮೋಡದ ಆತಂಕದಿಂದ ಹೊರಬಂದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿಶಾಲೆಗಳ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದಲೇ ಪರೀಕ್ಷಾ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ಬರೆಯಲಿರುವ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ ಮಕ್ಕಳೂ ಕಾರ್ಯಕ್ರಮ ವೀಕ್ಷಿಸುತ್ತಿರುವುದು ಚೇತೋಹಾರಿಯಾಗಿದೆ. ಶಿಕ್ಷಣ ಇಲಾಖೆಯ ಈ ನೂತನ ಉಪಕ್ರಮವು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಡೆಯಲಿರುವ ಭವಿಷ್ಯದ ಬದಲಾವಣೆಗಳಿಗೆ ದಿಕ್ಸೂಚಿಯಾಗಲಿದೆ.




ಲೇಖಕರ ಪರಿಚಯ

ಶ್ರೀ ರಾಮಚಂದ್ರ ಭಟ್ ಬಿ.ಜಿ.

ಪರೀಕ್ಷಾವಾಣಿಯ ಸಂಪನ್ಮೂಲ ವ್ಯಕ್ತಿಗಳು ಹಾಗೂ

NCERT 8-10ನೇ ತರಗತಿಗಳ ವಿಜ್ಞಾನ ಪಠ್ಯಪುಸ್ತಕ ಭಾಷಾಂತರ ಸಮಿತಿಯ ಪರಿಶೀಲಕರು

ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಬ್ಯಾಟರಾಯನಪುರ

ಮೈಸೂರು ರಸ್ತೆ, ಬೆಂಗಳೂರು-26

ಮೊಬೈಲ್ ಸಂಖ್ಯೆ : 7892163470

 

bgramachandra1974@gmail.com



Featured Post

salt analysis pu chemistry

salt analysis pu chemistry